ಆನ್ಲೈನ್ ಗೇಮ್ನಲ್ಲಿ ಹಣ ಕಳೆದುಕೊಂಡ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ. ಬಸವರಾಜ ಸಕ್ರೆಪ್ಪನವರ (28) ಎಂಬ ಯುವಕನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಮಂಗಳಗಟ್ಟಿ ಗ್ರಾಮದಲ್ಲೇ ಈತ ಯು ಕಿ ಟೆಕ್ಸ್ ಫೈನಾನ್ಸ್ ಹಣ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ. ಪೈನಾನ್ಸ್ಗೆ ಕಟ್ಟಬೇಕಿದ್ದ ಹಣವನ್ನ ಆನ್ ಲೈನ್ ಗೇಮ್ಗೆ ಈತ ಬಳಸಿಕೊಂಡಿದ್ದ.