ಹಸುವಿನ ಚರ್ಮವನ್ನು ಧಾರವಾಡದಿಂದ ತಮೀಳುನಾಡಿಗೆ ತೆಗೆದುಕೊಂಡು ಹೋಗುವ ವಾಹನವನ್ನು ಹಿಡಿದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ. ಧಾರವಾಡ ಬೈಪಾಸ್ ರಸ್ತೆಯ ಯರಿಕೊಪ್ಪದ ಬಳಿಯಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪ್ರಕರಣ ದಾಖಲಿಸಿಕೊಂಡಿದ್ದಾರೆ.