ಡಾ.ಕೆ.ಸುಧಾಕರ್ ಟೆಂಪಲ್ ರನ್ ಜೊತೆ ವಿವಿಧ ಮಠಗಳಿಗೆ ಭೇಟಿ | ಸೋಂಪುರ ಹೋಬಳಿಯ ಹೊನ್ನಮ್ಮಗವಿ ಮಠ, ಮೇಲಣಗವಿ ಮಠದ ಶ್ರೀಗಳ ಆರ್ಶೀವಾದ ಪಡೆದ ಸುಧಾಕರ್| ಈ ಚುನಾವಣೆ ನನ್ನ ರಾಜಕೀಯ ಜೀವನದಲ್ಲಿ ಮಹತ್ವದ್ದು, ಒಂದೇ ವರ್ಷದಲ್ಲಿ ಎರಡನೇ ಅವಕಾಶ ನೀಡುತ್ತಿರುವ ನಮ್ಮ ಪಕ್ಷದ ಹೈ ಕಮಾಂಡ್ ಗೆ ಅಭಾರಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಹೇಳಿದರು. ಸೋಂಪುರ ಹೋಬಳಿಯ ವಿವಿಧ ಮಠಗಳಿಗೆ ಹಾಗೂ ಶಿವಗಂಗೆ ದೇವಾಲಯಕ್ಕೆ ಶುಕ್ರವಾರ ಭೇಟಿ ನೀಡಿದ್ದರು.