ನಗರದ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಸುಮಾರು 2.50 ರಿಂದ 2.60 ಕೋಟಿ ಮೌಲ್ಯದ ಹತ್ತಿ, ಹತ್ತಿಕಾಳು, ಅರಳೆ, ಖಾಲಿ ಚೀಲ ಸುಟ್ಟು ಭಸ್ಮವಾದ ಘಟನೆ ಬುಧವಾರ ಬೆಳಿಗ್ಗೆ 6 ಗಂಟೆಗೆ ಸಂಭವಿಸಿದೆ. ಕೈಗಾರಿಕಾ ಪ್ರದೇಶದಲ್ಲಿ ಇರುವ ಶ್ರೀ ಶೈಲೇಶ್ವರ ಕಾಟನ್ ಜಿನ್ನರ್ಸ್ ನಲ್ಲಿ 6 ಗಂಟೆ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಜಿನ್ನಿಂಗ್ ಯಂತ್ರದ ತಾಂತ್ರಿಕ ಮತ್ತು ಶಾರ್ಟ್ ಸರ್ಕಟ್ ನ ಪರಿಣಾಮ ಬೆಂಕಿ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಮಾಹಿತಿ ತಿಳಿದ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಯಿತಾದರು ಅಷ್ಟೋತ್ತಿಗಾಗಲೇ ಭಾಗಶಹ ಹಾರ್ದಿಕ ಸುಟ್ಟು ಹೋಗಿತ್ತು.