ರಾಮನಗರ: ಬೈರಮಂಗಲ ಗ್ರಾಮಕ್ಕೆ ಎತ್ತಿನ ಗಾಡಿಯಲ್ಲಿ ಬಂದ ಆರ್.ಅಶೋಕ್
ಬೈರಮಂಗಲ ಗ್ರಾಮಕ್ಕೆ ರಾಜ್ಯ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಎತ್ತಿನ ಗಾಡಿಯಲ್ಲಿ ಆಗಮಿಸಿದರು. ಬೈರಮಂಗಲ ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದಾರೆ. ಈ ಧರಣಿಗೆ ಬೆಂಬಲ ಸೂಚಿಸಲು ಮಂಗಳವಾರ ಅಶೋಕ್ ಆಗಮಿಸಿದ್ದರು. ಈ ವೇಳೆ ಬೈರಮಂಗಲ ಸರ್ಕಲ್ ನಿಂದ ಎತ್ತಿನ ಬಂಡಿ ಮೂಲಕ ಸ್ವಾಗತ ಮಾಡಲಾಯಿತು .