ಹುಬ್ಬಳ್ಳಿ: ಇಲ್ಲಿನ ಉಣಕಲ್ ಶ್ರೀನಗರ ಹತ್ತಿರದ ಪ್ರೆಸಿಡೆಂಟ್ ಹೋಟೆಲ್ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮದುವೆಗೆ ಬಂದವರ ೨,೯೫ ಲಕ್ಷ ಮೌಲ್ಯದ ೩೫ ಗ್ರಾಂ ಆಭರಣ ಕಳ್ಳತನ ಮಾಡಲಾಗಿದೆ. ರಾಣೇಬೆನ್ನೂರು ಮೂಲದ ವಿದ್ಯಾವತಿ ನಜರೆ ಎಂಬುವರ ಆಭರಣ ಕಳ್ಳತನ ಮಾಡಲಾಗಿದೆ. ನ.೧೩ ರಂದು ಪ್ರೆಸಿಡೆಂಟ್ ಹೋಟೆಲ್ ನೆಲ ಮಹಡಿಯಲ್ಲಿ ಸಮಾರಂಭದ ಹಾಲ್ನಲ್ಲಿ ರಾತ್ರಿ ಅವಧಿಯಲ್ಲಿ ಕಳ್ಳರು ೩೦ ಗ್ರಾಂ ತೂಕದ ಪದಕದ ಸರ, ೫ ಗ್ರಾಂ ನೆಲ್ಲಿಕಾಯಿ ಗುಂಡಿನ ಸರ, ೧೫ ಸಾವಿರ ಹಣವಿದ್ದ ವ್ಯಾನಿಟಿ ಬ್ಯಾಗ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ---