ಇತ್ತೀಚಿಗೆ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಗಾದಿ ತಯಾರಿಸುವ ಕಾರ್ಖಾನೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಸುಟ್ಟಿದ್ದು ಇಂದು ಕಾರ್ಖಾನೆಗೆ ಭೇಟಿ ನೀಡಿದ ಮಾಜಿ ಸಿಎಂ ಹಾಗೂ ಸಂಸದರಾದ ಜಗದೀಶ್ ಶೆಟ್ಟರ್ ಅವರು ಸ್ಥಳವನ್ನು ವೀಕ್ಷಿಸಿ, ಶೀಘ್ರದಲ್ಲೇ ಪರಿಹಾರ ಕೊಡಿಸುವ ಭರವಸೆಯನ್ನು ಮಾಲಿಕರಾದ ಶ್ರೀ ವಷಿಂ ಅಕ್ರಮ ಹಿತ್ತಲಮನಿ ಅವರಿಗೆ ನೀಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮೋಹನ ಶೆಟ್ಟರ್, ಹೂವಪ್ಪಾ ದಾಯಗೋಡಿ, ಕಲಂದರ್ ಮುಲ್ಲಾ, ಶ್ರೀಮತಿ ಭಾರತಿ ಟಪಾಲ್, ಇಮ್ತಿಯಾಜ್ ಮುಲ್ಲಾ, ಜಯಶ್ರೀ ನಿಂಬರಗಿ, ಶ್ರೀಮತಿ ಮಧು ಪಟ್ಟಣಶೆಟ್ಟಿ, ಹಸನಸಾಬ ತಶೇವಾಲೆ, ಚಮನಸಾಬ ಮುಲ್ಲಾ, ಬಾಬುಲಾಲ್ ವರೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.