ಕುಂದಗೋಳ ಕ್ಷೇತ್ರದ ರಾಮಾಪೂರ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ₹27.80 ಲಕ್ಷ ರೂ. ವೆಚ್ಚದಲ್ಲಿ - ವಿವೇಕ ಯೋಜನೆಯಡಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡ ಎರಡು ಶಾಲಾ ಕೊಠಡಿಗಳನ್ನು ಶಾಸಕರಾದ ಎಂ.ಆರ್.ಪಾಟೀಲ್ ಅವರು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಮಹಾದೇವಿ ಮಾಡಲಗೇರಿ, ಕ್ಷೇತ್ರ ಸಮನ್ವಯ ಅಧಿಕಾರಿಗಳಾದ ಎಸ. ಎಸ. ಬೆಳವಟಗಿ, ಮುಖಂಡರುಗಳಾದ ಪ್ರಕಾಶ್ ಕುಬಿಹಾಳ, ಡಿ ವೈ ಲಕ್ಕನಗೌಡ್, ನಾಗನಗೌಡ ತಾತ್ಮಾರ್, ಸುನಿತಾ ನಲವಾಲ್, ಈರಣ್ಣ ಕಲ್ಕೊಡ್ಕರ್, ಶಿವಪ್ಪ ಬೆನ್ಕನ್ನವರ್ ಸೇರಿದಂತೆ ಉಪಸ್ಥಿತರಿದ್ದರು