ಅತಿವೇಗದ ಚಾಲನೆಯಿಂದ ಬೈಕ್ ಸವಾರನೊಬ್ಬ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಸೀತಾರಾಮಪುರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ. ನಡೆದಿದೆ. ಕೂಡ್ಲಿಗೆರೆ ಗ್ರಾಮದ ರವಿ (38) ಮೃತ ಬೈಕ್ ಸವಾರ. ರವಿ ಕೂಡ್ಲಿಗೆರೆ ಯಿಂದ ಭದ್ರಾವತಿ ತೆರಳುವ ವೇಳೆ ಅತಿವೇಗದಿಂದ ಚಾಲನೆ ಮಾಡಿದ ಪರಿಣಾಮ ಎದುರಿಗೆ ಬಂದ್ ಖಾಸಗಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.