ನಂಜೆದೇವಪುರದಲ್ಲಿ 5 ಹುಲಿಗಳು ಪತ್ತೆ ಪ್ರಕರಣ ಸಂಬಂಧ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸುತ್ತಿದ್ದು ಸೋಮವಾರ ಮಧ್ಯಾಹ್ನ ಎರಡು ಸಾಕಾನೆಗಳು ಅಖಾಡಕ್ಕಿಳಿದಿದೆ. ನಂಜದೇವಪುರ ಗ್ರಾಮಸ್ಥರು ದುಬಾರೆ ಆನೆ ಶಿಬಿರದಿಂದ ಬಂದ ಈಶ್ವರ್ ಹಾಗೂ ಲಕ್ಷ್ಮಣನಿಗೆ ಪೂಜೆ ಸಲ್ಲಿಸಿ ಎಲ್ಲವೂ ಒಳ್ಳೆಯದಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. 42 ವರ್ಷದ ಈಶ್ವರ 40ಕ್ಕೂ ಹೆಚ್ಚು ಕೂಂಬಿಂಗ್ ನಲ್ಲಿ ಭಾಗಿಯಾಗಿದ್ದು ಈಶ್ವರನ ಮಾವುತರಾಗಿ ವಿಶ್ವನಾಥ್ ಹಾಗೂ ಮಂಜುನಾಥ್ ಬಂದಿದ್ದಾರೆ. ಲಕ್ಷ್ಮಣನಿಗೆ 45 ವರ್ಷವಾಗಿದ್ದು 50ಕ್ಕೂ ಹೆಚ್ಚು ಕೂಂಬಿಂಗ್ ನಲ್ಲಿ ಭಾಗಿಯಾಗಿದ್ದು ಲಕ್ಷ್ಮಣನ ಮಾವುತರಾಗಿ ಸಂಜು ಹಾಗೂ ಸುರೇಶ ಆಗಮಿಸಿದ್ದಾರೆ. ಇಂದು ಸಂಜೆಯಿಂದ ಎರಡನೇ ಹಂತದ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿದೆ.