ಯಲ್ಲಾಪುರ : ಮಕ್ಕಳು ಎದುರಿಸುತ್ತಿರುವ ಕುಂದು ಕೊರತೆ ಸವಾಲುಗಳನ್ನು ಮಕ್ಕಳ ಬಾಯಿಯಿಂದಲೇ ಕೇಳಿ ತಿಳಿದುಕೊಳ್ಳುವ ಉದ್ದೇಶದಿಂದ ಸರ್ಕಾರ 31 ಜಿಲ್ಲೆಗಳಲ್ಲೂ ಮಕ್ಕಳಅಹವಾಲು ಸ್ವೀಕಾರ ಕಾರ್ಯಕ್ರಮ ಆಯೋಜಿಸಲಾಗಿದೆ.ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ ಟಿ ಹೇಳಿದರು. ಅವರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಯಲ್ಲಿ ಜಿಲ್ಲಾಡಳಿತ,ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಕ್ಕಳ ಉಚಿತಮತ್ತು ಕಡ್ಡಾಯ ಶಿಕ್ಷಣಹಕ್ಕು ಕಾಯ್ದೆ ಕುರಿತು ಮಕ್ಕಳೊಂದಿಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.