ಹುಬ್ಬಳ್ಳಿಯ ಮಂಗಳವಾರ ಪೇಟೆಯ ರುದ್ರಾಕ್ಷಿ ಮಠದಲ್ಲಿ ಇಂದು ಜರುಗಿದ ಶ್ರೀ ನಿಜಗುಣ ಶಿವಯೋಗಿಗಳವರ 77ನೇ ವಾರ್ಷಿಕ ಜಯಂತಿ ಉತ್ಸವ, ಪ್ರವಚನ, ಶ್ರೀ ನಿಜಗುಣರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶ್ರೀ ಬಸವಲಿಂಗೇಶ್ವರ ದೀಪೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಸದರು ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಶ್ರೀ ಚನ್ನಮಲ್ಲ ದೇವರು, ಪ್ರಮುಖರಾದ ಮೃತ್ಯುಂಜಯ ಮರೋಳ, ಮಲ್ಲಿಕಾರ್ಜುನ ಸಾಹುಕಾರ, ಮೋಹನ ಶೆಟ್ಟರ್, ಸದಾಶಿವ ಚೌಶಟ್ಟಿ, ವಿರೂಪಾಕ್ಷ ರಾಯನಗೌಡರ, ಮಹಾಂತೇಶ ಗಿರಿಮಠ ಇದ್ದರು.