ಹುಬ್ಬಳ್ಳಿ: ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಂತೋಷನಗರದಲ್ಲಿ ಪಾರ್ಕಿಂಗ್ ವಿಚಾರಕ್ಕೆ ದಂಪತಿ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕಾರಿನ ಪಕ್ಕ ಬೈಕ್ ನಿಲ್ಲಿಸಿದ ವಿಚಾರಕ್ಕೆ ಕೋಪಗೊಂಡು, ಉಮೇಶ್ ಹಾಗೂ ಆತನ ಕುಟುಂಬಸ್ಥರು ವಿಜಯಲಕ್ಷ್ಮೀ ಮತ್ತು ಪತಿ ವಿಶ್ವಾರಾಧ್ಯ ಎಂಬ ದಂಪತಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷನಗರದ ಒಂದೇ ಕಟ್ಟಡದಲ್ಲಿ ವಾಸವಿರುವ ಎರಡು ಕುಟುಂಬಗಳ ನಡುವೆ, ಕಳೆದ ಮೂರು-ನಾಲ್ಕು ತಿಂಗಳಿಂದ ಜಗಳ ನಡೆಯುತ್ತಿದೆ ಎಂದು ಹಲ್ಲೆಗೊಳಗಾದವರು ದೂರಿನಲ್ಲಿ ತಿಳಿಸಿದ್ದಾರೆ.