ಹುಬ್ಬಳ್ಳಿ : ಸಬ್ ಜೈಲ್ ಮೇಲೆ ಪೊಲೀಸರ ದಾಳಿ ಪ್ರಕರಣ ವಿಚಾರವಾಗಿ ದಾಳಿ ವೇಳೆ ಯಾವುದೇ ನಿಷೇಧಿತ ವಸ್ತು ಸಿಕ್ಕಿಲ್ಲ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಉಪ ಕಾರಾಗೃಹ ಮತ್ತು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ಮಾಡಿದ್ದೇವೆ ಡ್ರಗ್ಸ್ , ಮಾರಕಾಸ್ತ್ರಗಳು ಇವೆಯಾ ಅಂತ ತಪಾಸಣೆ ಮಾಡಲಾಗಿದೆ ಮೊಬೈಲ್ ಗಳನ್ನು ಕೂಡಾ ಚೆಕ್ ಮಾಡಲಾಗಿದೆ ಜೊತೆಗೆ ಜೈಲಿನ ಸುರಕ್ಷಿತ ಬಗ್ಗೆ ಕೂಡಾ ಪರಿಶೀಲನೆ ಮಾಡಲಾಗಿದೆ ಎರಡು ಜೈಲಿನಲ್ಲಿ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿಲ್ಲ ಸುರಕ್ಷತಾ ಕ್ರಮಗಳನ್ನು ಕೂಡಾ ಜೈಲು ಸಿಬ್ಬಂದಿ ಎರಡು ಕಡೆ ಸರಿಯಾಗಿ ಮಾಡಿದ್ದಾರೆ ಎಂದರು.