ಧಾರವಾಡ: ನಗರದ ಕಾಸ್ಮಾಸ್ ಕ್ಲಬ್ನಿಂದ ತರಬೇತಿ ಹೊಂದಿದ ಹಲವಾರು ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿರುವುದು ಹೆಮ್ಮೆಯ ವಿಷಯ ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಸಿ.ಆರ್.ರವೀಶ್ ಹೇಳಿದರು. ನಗರದ ಕಾಸ್ಮಸ್ ಕ್ಲಬ್ನಲ್ಲಿ ಆರಂಭವಾದ ಕಾಸ್ಮಸ್ ಕಪ್ ಕರ್ನಾಟಕ ಸ್ಟೇಟ್ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಾಮೆಂಟ್ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಈ ಕ್ಲಬ್ ಅತ್ಯಂತ ಸುವ್ಯವಸ್ಥಿತ ಹಾಗೂ ಕ್ರೀಡಾ ಸ್ಫೂರ್ತಿಯಿಂದ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ ಕ್ರೀಡಾ ವಲಯದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವುದು ಧಾರವಾಡದ ಹೆಮ್ಮೆ ಎಂದರು. ಈ ವೇಳೆ ಕ್ಲಬ್ ಅಧ್ಯಕ್ಷ ನಿತೀನ್ ಟಗರಪುರ, ಮಾಜಿ ಅಧ್ಯಕ್ಷ ಎ.ಸಿ.ಪುರದ, ಕ್ಲಬ್ ನಡೆದು ಬಂದ ದಾರಿಯ ಕುರಿತು ವಿವರಿಸಿದರು. ಮಾಜಿ ಅಧ್ಯಕ್