ಯಲ್ಲಾಪುರ : ಯಾವದೇ ಭವನ ಒಂದೇ ಸಂಘಟನೆಯಿಂದ ನಿರ್ಮಿತ ವಾದರೂ ಆ ಸಂಘಟನೆ ಗೆ ಅಷ್ಟೇ ಸೀಮಿತವಾಗದೆ ಸರ್ವ ಸ್ಪರ್ಶಿ ಸರ್ವ ಭಾಗಿಯಾಗಿ ಸಮಾಜದ ಎಲ್ಲರ ಆಶೋತ್ತರ ಈಡೇರಿಸುವಂತ ಭವನವಾಗಿರಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಪಟ್ಟಣದ ಸರ್ಕಾರಿ ನೌಕರರ ಭವನದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ ಪಂ ಮಾಜಿ ಅಧ್ಯಕ್ಷ ದಿವಂಗತ ಪಿ.ಟಿ.ಮರಾಠ ಅವರ ದೂರದೃಷ್ಟಿ ಮತ್ತು ಬದ್ಧತೆ ಇಂತಹ ಮಹಾಕಾರ್ಯಕ್ಕೆ ಪಟ್ಟಣದ ಹೃದಯಭಾಗದಲ್ಲಿ ಭೂಮಿ ಉಳಿಸಿದಂತಾಗಿದೆ. ಎಂದರು