ಹುಬ್ಬಳ್ಳಿ: ಪಂಚಮಸಾಲಿ ಟ್ರಸ್ಟ್ ಮತ್ತು ನಮ್ಮ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಹೀಗಾಗಿ ಪೀಠದ ಮೂಲ ಸ್ಥಾನವನ್ನು ಸ್ಥಳಾಂತರ ಮಾಡಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲೈದು ಜನರಿಗೆ ನಮ್ಮ ಮೇಲೆ ಅಸಮಾಧಾನ ಇದೆ. ಆದರೆ ಗಟ್ಟಿಕಾಳು ನಮ್ಮ ಜೊತೆಗೆ ಇವೆ. ನಾವು ಸಮಾಜದ ಅಭಿವೃದ್ಧಿ ಪರವಾಗಿ ಹೆಜ್ಜೆ ಹಾಕುವ ಸಂದರ್ಭದಲ್ಲಿ ಇಂತಹ ಮಾತುಗಳು ಬರುವುದು ಸಹಜ ಎಂದರು. ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತನೂ ಅಲ್ಲ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಕಾರ್ಯಕರ್ತ ಅಂದರೂ, ಈಗ ಬಿಜೆಪಿ ಕಾರ್ಯಕರ್ತ ಅಂತಿದ್ದಾರೆ. ಆದರೆ ನಮ್ಮ ನಿಲುವು ಒಂದೇ ಸಮಾಜದ ಅಭಿವೃದ್ಧಿ ನಮ್ಮ ಕೆಲಸ ಎಂದು