ಸಿರಗುಪ್ಪ: ತಾಲೂಕಿನಲ್ಲಿ ಗುಡುಗು ಸಹಿತ ಮಳೆ, ನೆಲಕಚ್ಚಿದ ಭತ್ತ ; ಆತಂಕದಲ್ಲಿ ರೈತರು
ತಾಲೂಕಿನಲ್ಲಿ ಮಂಗಳವಾರ ಸಂಜೆ 6ಗಂಟೆಗೆ ಗುಡುಗು ಸಹಿತ ಸುರಿದ ಮಳೆಗೆ ಅಪಾರ ಪ್ರಮಾಣದ ಭತ್ತದ ಬೆಳೆ ನೆಲ ಕಚ್ಚಿದೆ. ಎ0.ಸೂಗೂರು, ರುದ್ರಪಾದ, ನಡವಿ, ನಿಟ್ಟೂರು, ಹೆರಕಲ್ಲು ಗ್ರಾಮಗಳಲ್ಲಿ ಸೋನಾ ಮಸೂರಿ, ಆರ್ ಎನ್ ಆರ್, ಗಂಗಾ ಕಾವೇರಿ ತಳಿಯ ಭತ್ತದ ಬೆಳೆಯ ಕಟಾವು ನಡೆಯುತ್ತಿದೆ. ಈಗ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಆತಂಕ ಹೆಚ್ಚಿಸಿದೆ. ತೆಕ್ಕಲಕೋಟೆ, ಕರೂರು ಹೋಬಳಿ ವ್ಯಾಪ್ತಿಯ ಭೈರಾಪುರ, ದರೂರು, ಬಲಕುಂದಿ, ಉಪ್ಪಾರ ಹೊಸಳ್ಳಿ, ಹಳೇಕೋಟೆ ಗ್ರಾಮದ ಭತ್ತದ ಬೆಳೆಯು ಕಾಳು ಕಟ್ಟಿದ್ದು, ರೈತರು ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ನೆಲಕಚ್ಚಿದೆ. ಕೆಲವಡೆ ಅರ್ಧದಷ್ಟು ಬೆಳೆ ನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ಸುರುಳಿ ಸುತ್ತಿ ನೆಲಕ್