ಕಲಘಟಗಿ: ಗ್ರಾಮದ ನೀರಸಾಗರ ಜಲಾಶಯದಲ್ಲಿ ಈಜಲು ಹೋಗಿ ಯುವಕ ಸಾವು
ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದಲ್ಲಿ ಈಜಲು ತೆರಳಿದ್ದ ಹುಬ್ಬಳ್ಳಿ ಮೂಲದ ಯುವಕನೊಬ್ಬ ಈಜು ಬಾರದೆ ಮುಳುಗಿ ಸಾವನಪ್ಪಿದ ಘಟನೆ ನಡೆದಿದೆ.  ಹುಬ್ಬಳ್ಳಿಯಿಂದ ತನ್ನ ಸ್ನೇಹಿತರೊಂದಿಗೆ ನೀರಸಾಗರ  ಜಲಾಶಯಕ್ಕೆ ಈಜಲು ಹೋಗಿದ್ದ ಹುಬ್ಬಳ್ಳಿಯ ಸದರ್ ಸೋಫಾ ನಿವಾಸಿ ಈಜು ಬಾರದೆ ಮುಳಗಿ ಸಾವನಪ್ಪಿದ್ದು. ಯುವಕನ ಮೃತ ದೇಹವನ್ನು ಹೊರ ತೆಗೆದಿದ್ದು . ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಘಟನೆ ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.