ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ 05 ರ ವಾರ್ಡ್ 49ರ ಆಶ್ರಯ ಕಾಲೋನಿಯ ಸಕರಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿರುವ ಶಿಕ್ಷಕರು ಮತ್ತು ಮಕ್ಕಳ ಸಹಯೋಗದೊಂದಿಗೆ ಪಾಲ್ಗೊಂಡು ಸುತ್ತ ಮುತ್ತಲಿರುವ ಆಶ್ರಯ ಕಾಲೋನಿ ಮತ್ತು ಮಹಾಲಕ್ಷ್ಮಿ ನಗರಕ್ಕೆ ಮಕ್ಕಳ ಜಾಥಾದೊಂದಿಗೆ ಹೋಗಿ ಕಸವನ್ನು ಯಾರು ಹೊರಗಡೆ ಚಲ್ಲಬಾರದು ಕಸವನ್ನು ಕಸದ ಗಾಡಿಗೆ ಹಾಕಬೇಕು, ಸ್ವಚ್ಛ ನಗರ ಸುಂದರ ನಗರ, ಹಸಿ ಕಸದಿಂದ ಗೊಬ್ಬರ ಬಳಸಿ ಬೆಳೆ ಬರುವುದು ಬರಪೂರ ಎಂದು ಮುಂತಾದ ವ್ಯಾಖ್ಯಗಳ ಮೂಲಕ ಸುತ್ತ ಮುತ್ತಲಿರುವ ಸಾರ್ವಜನಿಕರಿಗೆ ಮನದಟ್ಟು ಮಾಡಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡ ಆರೋಗ್ಯ ನಿರೀಕ್ಷಕರು, ಜಮಾದಾರರು ಸಮುದಾಯ ಸಂಚಾಲಕರು ಉಪಸ್ಥಿತರಿದ್ದರು