ಧಾರವಾಡ: ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಇಂದು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ಮಧ್ಯೆಯೂ ರಿಲಾಕ್ಸ್ ಮೂಡ್ನಲ್ಲಿ ಧಾರವಾಡದ ಕಾರ್ಯಕ್ರಮಗಳಿಗೆ ತೆರಳುವ ಮಾರ್ಗ ಮಧ್ಯೆ ಧಾರವಾಡ ನವಲೂರಿನ ಪ್ರಸಿದ್ಧ ನವಲೂರು ಪೇರಲ ಹಣ್ಣುಗಳನ್ನು ಸವಿದು ಆನಂದಿಸಿದರು.ತಾವೇ QR ಕೋಡ್ ಬಳಸಿ ಖರೀದಿಸಿದ ಹಣ್ಣಿನ ಹಣವನ್ನು ಖುದ್ದಾಗಿ ನೀಡಿದರು. ಧಾರವಾಡ ಪೇಡೆಯಂತೆಯೇ ನಮ್ಮ ನವಲೂರು ಪೇರಲ ಹಣ್ಣು ಪ್ರಸಿದ್ದಿಯನ್ನು ಪಡೆದಿದೆ. ಪ್ರಯಾಣದ ಮಧ್ಯೆ ಇದು ಸಚಿವರ ಗಮನ ಸೆಳೆದಿದ್ದು, ತಮ್ಮ ವಾಹನವನ್ನು ನಿಲ್ಲಿಸಿ ಹಣ್ಣಿನ ಸವಿ ಸವಿದರು.