ಹುಬ್ಬಳ್ಳಿ: ವಿವೇಕ ಜಾಗ್ರತ ಬಳಗಗಳು ಉತ್ತರ ವಲಯ-೧ ಮತ್ತು ೨ ರ ಸಂಯುಕ್ತಾಶ್ರಯದಲ್ಲಿ ದಿವ್ಯ ಗಾನಾಮೃತ ಕಾರ್ಯಕ್ರಮವು ನವೆಂಬರ್ ೩೦ ರಂದು ಮು. ೧೧ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಗರದ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಬಳಗದ ದಕ್ಷ ಸೇವಕಿ ಡಾ. ಪಂಕಜಾ ಬ್ಯಾಕೋಡಿ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಯೋಗಬನದ ಸರ್ವಕ್ಷೇಮಾ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಡಾ. ವಿವೇಕ ಉಡುಪ ಅವರು ಉಪನ್ಯಾಸ ನೀಡಲಿದ್ದು, ಡಿವೈನ್ ಪಾರ್ಕ್ ಸಿಸ್ಟರ್ ನಿವೇದಿತಾ ಅವರು ಸಾಮೂಹಿಕ ಭಜನೆ ನೇತೃತ್ವ ವಹಿಸಲಿದ್ದಾರೆ. ಡಾ. ಚಂದ್ರಶೇಖರ ಉಡುಪ ಅವರ ನೇತೃತ್ವದಲ್ಲಿ ವ್ಯಕ್ತಿತ್ವ ನಿರ್