ಕಾರವಾರ :ತಾಲ್ಲೂಕಿನ ಚಿತ್ತಾಕುಲ ಗ್ರಾಮ ಪಂಚಾಯತಿ ವ್ಯಾಪ್ತಿಯ ದೇವಬಾಗ ನರಸಿಂಹ ಶಿಟ್ಟಾದಲ್ಲಿ ಪೂಜಿಸಿರುವ ಶ್ರೀಕೃಷ್ಣ ಮೂರ್ತಿ ದರ್ಶನ ಪಡೆದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಒಳಿತಿಗೆ ಮತ್ತು ಸರ್ವರಿಗೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಯನ್ನು ದಯಪಾಲಿಸಲೆಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಸೂರಜ ದೇಸಾಯಿ, ಅನಿಲ ಮಾಜಾಳಿಕರ, ಪ್ರಣಯ ರಾಣೆ, ಸ್ವಾತಿ ದೇಸಾಯಿ, ಅಶೋಕ ರಾಣೆ, ರಾಜೇಶ್ ಅಂಕೋಲೆಕರ, ಶಿವಾ ಕೊಬ್ರೆಕರ, ಪೂಜಾ ನಾಯ್ಕ, ಶೈಲು ಗಡಕರ, ರೂಪಾಲಿ ನಾಯ್ಕ ರವರ ಮಗ ಪರ್ಬತ್, ಸೊಸೆ ರೇಖಾ, ಮೊಮ್ಮಗ ಇತರರು ಇದ್ದರು.