ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಈಶ್ವರನಗರ ಸುಡಗಾಡಗಟ್ಟಿ ಹತ್ತಿರ ನಡೆದಿದೆ.ಎಗ್ ರೈಸ್ ತಿನ್ನುವ ವಿಚಾರಕ್ಕೆ ಶುರುವಾದ ವಿವಾದವೇ ಹಲ್ಲೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಎಗ್ ರೈಸ್ ಅಂಗಡಿಗೆ ತೆರಳಿ ಗುಂಡಾಗಿರಿ ಪ್ರದರ್ಶಿಸಿದ ದುಷ್ಕರ್ಮಿಗಳು ಅವ್ಯಾಚ ಪದಗಳಿಂದ ನಿಂದಿಸಿ, 27 ವರ್ಷದ ಗಂಗಾಧರ್ ಮಡಿವಾಳರ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಕೋರರು ಯುವಕನ ಮುಖದ ಭಾಗಕ್ಕೆ ಕಲ್ಲು ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದು, ಗಂಗಾಧರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶಾಲ್ ಹೊಸಮನಿ, ಆತನ ಸಹೋದರ ಪ್ರವೀಣ್ ಹೊಸಮನಿ, ಹಾಗೂ ಇನ್ನೂ ಐದರಿಂದ ಆರು ಜನರ ಗುಂಪು ಸೇರಿಕೊಂಡು ಹಲ್ಲೆ ನಡೆಸಿದ್ದಾರೆ.ಗಂಭೀರವಾಗಿ