ಬೆಂಗಳೂರು ದಕ್ಷಿಣ: ಗಿರಿನಗರ ಬಳಿ ಕಾರ್ನಲ್ಲಿ ಸಾಗಿಸುತ್ತಿದ್ದ ಮಾದಕ, ನಗದು ಜಪ್ತಿ
ಕಾರ್ನಲ್ಲಿ ಸಾಗಿಸುತ್ತಿದ್ದ ಮಾದಕ ಪದಾರ್ಥ, ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ಗಳನ್ನ ಗಿರಿನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸೆಪ್ಟೆಂಬರ್ 16ರಂದು ಸಂಜೆ 4:30ರ ಸುಮಾರಿಗೆ ವೀರಭದ್ರ ನಗರದ ಸಿಗ್ನಲ್ ಬಳಿ ಕರ್ತವ್ಯದಲ್ಲಿದ್ದ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಬಿಳಿ ಬಣ್ಣದ ಸ್ವಿಫ್ಟ್ ಕಾರ್ನ್ನ ತಡೆದು ತಪಾಸಣೆಗೊಳಪಡಿಸಿದ್ದರು.ಈ ಸಂದರ್ಭದಲ್ಲಿ 21.93 ಕೆ.ಜಿ ಗಾಂಜಾ,2.89 ಲಕ್ಷ ನಗದು, 88 ಗ್ರಾಂ ಚಿನ್ನಾಭರಣ ಹಾಗೂ 5 ಮೊಬೈಲ್ ಫೋನ್ಗಳು ಪತ್ತೆಯಾಗಿವೆ. ಪ್ರಕರಣದ ಕುರಿತು ಇಂದು ಮಾಹಿತಿ ನೀಡಿದ ಪೊಲೀಸರು, "ಕಾರು ಸಮೇತ ಚಾಲಕ ನಯೀಂ ಅಹಮದ್ನನ್ನ ವಶಕ್ಕೆ ಪಡೆಯಲಾಗಿದೆ" ಎಂದರು