ಹುಬ್ಬಳ್ಳಿ: ಇಲ್ಲಿನ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಅಷ್ಟಾನಿಕ ಪರ್ವದ ಅಂಗವಾಗಿ ಅ.೩೦ ರಿಂದ ನ. ೬ ರವರೆಗೆ ಸಿದ್ದಚಕ್ರ ಆದಾಧನೆ ಮಹೋತ್ಸವ ನಡೆಯಲಿದೆ ಎಂದು ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ತಿಳಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಹಾಗೂ ಶ್ರೀ ಭಗವಾನ್ ಮಹಾವೀರರು ಕೇವಲ ವ್ಯಕ್ತಿ ಆಧಾರಿತ ಕಥೆಗಳಲ್ಲ. ಮಹಾನ್ ಪುರುಷರು ಇಬ್ಬರಿಗೂ ಬಹಳಷ್ಟು ಸಾಮ್ಯತೆ ಇದೆ. ಹೀಗಾಗಿ ದೀಪಾವಳಿಯಲ್ಲಿ ಶ್ರೀರಾಮ ಹಾಗೂ ಮಹಾವೀರರ ಉತ್ಸವ ಆಚರಣೆ ಮಾಡಲಾಗಿತ್ತದೆ. ದೀಪಾವಳಿ ಪಾಡ್ಯದ ನಂತರ ನಿರ್ವಾಣ ಮಹೋತ್ಸವ ವರ್ಷ ಆರಂಭವಾಗಲಿದ್ದು, ನಾಡಿನಲ್ಲಿ ಶಾಂತಿ ಸಮೃದ್ಧಿ, ಆರೋಗ್ಯ ಸುಧಾರಣೆಗಾಗಿ ಎಂಟು ದಿವಸಗಳ ಕಾಲ ಸಿದ್ಧಚಕ್ರ ಮಹಾರಾಧನಾ ಹಮ್ಮಿಕೊಳ್ಳಲಾಗಿದೆ ಎಂದರು..