ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ನಾನಕೀ ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಪೂರ್ವ ಸಂಕಲ್ಪಿತ 11 ಕೋಟಿ ಶ್ರೀಹನುಮಾನಚಾಲೀಸಾ ಪಾಠದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಭಾಗಿಯಾಗಿದ್ದರು. ಹೆಬ್ಬಳ್ಳಿಯ ಶ್ರೀಕ್ಷೇತ್ರದ ಪ.ಪೂ ಶ್ರೀದತ್ತಾವಧೂತ ಗುರುಗಳ ನೇತೃತ್ವದಲ್ಲಿ ಹುಬ್ಬಳ್ಳಿ ಮಹಾನಗರದಲ್ಲಿ 100 ಗಂಟೆಗಳ ಕಾಲ ಶ್ರೀಹನುಮಾನಚಾಲೀಸಾ ಪಠಣ ಅಭೂತಪೂರ್ವವಾಗಿ ನಡೆದಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಮಹೇಶ್ ಟೆಂಗಿನಕಾಯಿ ಸೇರಿದಂತೆ ಉಪಸ್ಥಿತಿ ಇದ್ದರು.