ಧಾರವಾಡ ನಗರದಲ್ಲಿ ಗಂಗಾ ಆರತಿಗೆ ಪ್ರಸಿದ್ಧಿಯಾಗಿರುವ ಶಾಲ್ಮಲಾ ನದಿ ಉಗಮ ಸ್ಥಾನದಲ್ಲಿ ನವಂಬರ್ 8ರಂದು ಗಂಗಾ ಆರತಿ ನಡೆಯಲಿದ್ದು, ಇಂದು ಸ್ಥಳ ಪರಿಶೀಲಿಸಿ ಸುತ್ತಮುತ್ತಲು ಬೆಳೆದಿರುವ ಕಸ ತೆಗೆಯಲು ಹಾಗೂ ಬೀದಿ ದೀಪ ಅಳವಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಸೂಚಿಸಿದರು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ಸೇರಿದಂತೆ ಉಪಸ್ಥಿತಿ ಇದ್ದರು.