ಕಲಘಟಗಿಯ ತಾಲೂಕಿನ ಮಿಶ್ರಿಕೋಟಿ ಗ್ರಾಮದಿಂದ ಗಂಜಿಗಟ್ಟಿ ಗ್ರಾಮದವರೆಗೆ ಕೇಂದ್ರ ಸರ್ಕಾರದ 2023 - 24 ನೇ ಸಾಲಿನ ಕೇಂದ್ರ ರಸ್ತೆ ಮೂಲಸೌಕರ್ಯ ನಿಧಿ ( CRIF) 6 ಕೋಟಿ ಅನುದಾನದಡಿ 3.30 ಕಿ.ಮೀ ರಸ್ತೆ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿಯವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಲಘಟಗಿಯ ಹನ್ನೆರಡು ಎತ್ತಿನಮಠದ ರೇವಣ್ಣಸಿದ್ದೇಶ್ವರ ಶ್ರೀಗಳು, ಮಾಜಿ ವಿಧಾನ ಪರಿಷತ್ ಸದಸ್ಯರಾದ ನಾಗರಾಜ ಛಬ್ಬಿ, ಧಾರವಾಡ ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಸುತಗಟ್ಟಿ, ಭೀಮಣ್ಣ ಗಾಣಿಗೇರ ಸೇರಿದಂತೆ ಉಪಸ್ಥಿತಿ ಇದ್ದರು..