ಬೆಂಗಳೂರು ಉತ್ತರ: ನಟ ದರ್ಶನ್ ಜಾಮೀನು ರದ್ದು; ಸುಪ್ರೀಂ ಕೋರ್ಟ್ ತೀರ್ಮಾನಕ್ಕೆ ಗೌರವ ಕೊಡಬೇಕು: ನಗರದಲ್ಲಿ ಸಚಿವ ಎಂ.ಬಿ ಪಾಟೀಲ್
ನಟ ದರ್ಶನ್ ಜಮೀನು ರದ್ದು ವಿಚಾರಕ್ಕೆ ಸಂಬಂಧಿಸಿ ಗುರುವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ ಬಿ ಪಾಟೀಲ್ ಅವರು, ನಟ ದರ್ಶನ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಮಾನಕ್ಕೆ ಎಲ್ಲರಯ ಗೌರವ ನೀಡಬೇಕು. ದೇಶದಲ್ಲಿ ಕಾನೂನು ತನ್ನದೇ ಆದ ಮಹತ್ವ ಹೊಂದಿದೆ. ಏನೇ ನಡೆದರೂ ಕಾನೂನು ಅಡಿಯಲ್ಲೇ ಆಗುತ್ತೆ. ಕೊಲೆ ಪ್ರಕರಣದಲ್ಲಿ ಈ ಹಿಂದೆ ಅವರಿಗೆ ಜಾಮೀನು ಮಂಜೂರು ಆಗಿತ್ತು. ಈಗ ಅದರ ಬಗ್ಗೆ ಪರಮರ್ಶೆ ಮಾಡಕ್ಕೆ ಆಗಲ್ಲ ಎಂದರು.