ಬೆಂಗಳೂರಿನ ಕ್ರಿಕೆಟ್ ಈಗ ಕೆಟ್ಟು ಹೋಗಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಹೇಳಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಗಾಗಿ ನಾವು ಈಗ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಎಲ್ಲ ಜಿಲ್ಲೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ತಾ ಇದೆ. ನಮ್ಮ ಜೊತೆ ಉತ್ತಮವಾದ ಟೀಂ ಇದೆ ಎನ್ನುವುದಕ್ಕೆ ನಮಗೆ ಖುಷಿಯಾಗುತ್ತಿದೆ. ನಮ್ಮ ಟೀಂ ನಲ್ಲಿ ಮಹಿಳಾ ಆಟಗಾರ್ತಿ ಕೂಡ ಇದ್ದಾರೆ ಎಂದರು. ನಾವು ಎಲ್ಲರನ್ನು ಸಮಾನಾಗಿ ನೋಡುತ್ತೇವೆ. ಈಗಾಲೇ ಮಹಿಳೆಯರು ತಮ್ಮ ಸಾಮರ್ಥ್ಯ ತೋರಿದ್ದಾರೆ. ಕಪಿಲ್ ದೇವ್ ರೀತಿಯಲ್ಲಿ ಮಹಿಳೆಯರ ತಂಡ ವರ್ಲ್ಡ್ ಕಪ್ ಗೆದ್ದಿದೆ.