ಬೆಂಗಳೂರು ಉತ್ತರ: ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಪ್ರಗತಿ ಕಂಡಿದೆ: ನಗರದಲ್ಲಿ ಪದ್ಮಭೂಷಣ ಎ.ಸೂರ್ಯ ಪ್ರಕಾಶ್
ಕಳೆದ ಏಳು ದಶಕಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಅಭೂತಪೂರ್ವ ಪ್ರಗತಿಯನ್ನು ಕಂಡಿದೆ ಎಂದು ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ, ಪದ್ಮಭೂಷಣ ಡಾ.ಎ.ಸೂರ್ಯ ಪ್ರಕಾಶ್ ಅವರು ಹೇಳಿದರು. ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪದ್ಮಭೂಷಣ ಡಾ.ಎ.ಸೂರ್ಯ ಪ್ರಕಾಶ್ ಅವರು, ಭಾರತದ ಶ್ರೀಮಂತ ಇತಿಹಾಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು."ಕಳೆದ ಏಳು ದಶಕಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಕಂಡ ಅಭೂತಪೂರ್ವ ಪ್ರಗತಿಯನ್ನು ಸ್ಮರಿಸಿದರು. ಇದೇ ವೇಳೆ, ಹಳೆಯ ಬೆಂಗಳೂರು ದಿನಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು.