ಭಾಷೆ ವಿಚಾರದಲ್ಲಿ ಕನ್ನಡಿಗರನ್ನ ಪದೆ ಪದೆ ಕೆರಳಿಸು ಕೆಲಸಕಕ್ಕೆ ಕೆಲ ದುರುಳುರು ಕೈ ಹಾಕ್ತಿದ್ದಾರೆ. ತಿನ್ನೋದು ಇಲ್ಲಿನ ಅನ್ನ, ಕುಡಿಯೋದು ಇಲ್ಲಿನ ನೀರು ಆದ್ರೂ ಇವ್ರಿಗೆ ಕನ್ನಡ ಮಾತಾಡೋಕೆ ಗಾಂಚಲಿ. ಸದ್ಯ ಕನ್ನಡ ಮಾತಾಡು ಎಂದಿದ್ದಕ್ಕೆ ಅವಾಚ್ಯ ಪದ ಬಳಸಿದ ರಾಜಸ್ಥಾನದ ವ್ಯಕ್ತಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಚಿಕ್ಕಪೇಟೆಯ ಎಲೆಕ್ಟ್ರಿಕ್ ಅಂಗಡಿ ಮಾಲೀಕ ಜಾಲಂ ಎಂಬಾತ ದರ್ಪ ತೋರಿದ್ದಾನೆ. ವ್ಯಾಪಾರಕ್ಕೆಂದು ಬಂದಿದ್ದ ಗ್ರಾಹಕನ ಜೊತೆ ಭಾಷೆ ವಿಚಾರಕ್ಕೆ ಜಗಳ ತೆಗೆದು, ಈ ವೇಳೆ ಕನ್ನಡ ಮಾತಾಡು ಎಂದಿದ್ದಕ್ಕೆ ಅವಾಚ್ಯ ಪದ ಬಳಕೆ ಮಾಡಿ ನೀನೇ ಹಿಂದಿಯಲ್ಲಿ ಮಾತಾಡು ಎಂದು ಅಹಂಕಾರ ಪ್ರದರ್ಶನ ಮಾಡಿದ್ದಾನೆ. ಘಟನೆ ಬಗ್ಗೆ ಕನ್ನಡ ಸಂಘಟನೆಯವರಿಂದ ದೂರು ದಾಖಲಾಗಿದೆ.