ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಡಸೂರು ಅರಣ್ಯ ವ್ಯಾಪ್ತಿಯಲ್ಲಿದ್ದಂತಹ ಕಾಡಾನೆಗಳನ್ನು ಮರಳಿ ಶೆಟ್ಟಿಹಳ್ಳಿ ಕಾಡಿನತ್ತ ಓಡಿಸುವಂತ ಕಾರ್ಯಾಚರಣೆ ನಡೆಯುತ್ತಿದೆ. ಅರಣ್ಯ ಇಲಾಖೆಯಿಂದ ಎರಡು ಕಾಡಾನೆ ಓಡಿಸೋದಕ್ಕೆ ಥರ್ಮಲ್ ಸ್ಕ್ಯಾನ್ ಡ್ರೋನ್ ಸಹಾಯದಿಂದ ನಡೆಸಲಾಗುತ್ತಿದೆ. ಇದೀಗ ಮಡಸೂರು ಅರಣ್ಯದಿಂದ ಹೊರಟಿರುವಂತ ಎರಡು ಆನೆಗಳು, ಅಮಚಿ ಮಾರ್ಗವಾಗಿ ಹೊಳೆಕೊಪ್ಪ, ದೂಗೂರು, ಉಳವಿ, ಕೈಸೋಡಿ, ಮೈಸಾವಿ ಕಡೆಗೆ ಮುಖ ಮಾಡಿವೆ. ಹೀಗಾಗಿ ಈ ಭಾಗದ ಜಮೀನುಗಳಲ್ಲಿ ಇರುವಂತ ರೈತರು, ಕೂಲಿ ಕಾರ್ಮಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅರಣ್ಯಾಧಿಕಾರಿಗಳು ಶನಿವಾರ ಮಧ್ಯಾಹ್ನ 2 ಗಂಟೆಗೆ ಮನವಿ ಮಾಡಿದ್ದಾರೆ