ಯಲ್ಲಾಪುರ :ಪಟ್ಟಣದ ತಿಲಕ ಚೌಕ್ ದಲ್ಲಿ ಸಾರ್ವಜನಿಕ ಶ್ರೀ ಗಜಾನನೊತ್ಸವ ಸಮಿತಿಯ ಕಟ್ಟಡ ದ ಪಕ್ಕದಲ್ಲಿರುವ ಪುರಾತನ ಮರದ ರೆಂಭೆ ಗಳು ಅಪಾಯಕಾರಿಯಾಗಿ ರಸ್ತೆ ಬದಿ ಚಾಚಿಕೊಂಡು ಬೀಳುವ ಹಂತದಲ್ಲಿ ಇದ್ದವು. ಮುಂಬರುವ ಗ್ರಾಮದೇವಿ ಜಾತ್ರೆಯ ಮೆರವಣಿಗೆ ವೇಳೆ ದೇವಿಯರ ಮೂರ್ತಿ ಗೆ ರೆಂಬೆಗಳು ತಾಗಿ ಯಾವದೇ ಅವಘಡವಾಗಬಾರದೆಂದು ಹಾಗೂ ಇದೆ ರಸ್ತೆ ಮೂಲಕ ವಿದ್ಯಾರ್ಥಿಗಳು, ಸಾರ್ವಜನಿಕರು ಆತಂಕದಿಂದ ಓಡಾಡುವಂತಾಗಿತ್ತು ಹಾಗೂ ಪಕ್ಕದಲ್ಲಿದ್ದ ಕಟ್ಟಡಕ್ಕೆ ತೊಂದರೆ ಆಗುವದನ್ನು ಮನಗಂಡು ಸ್ಥಳೀಯರು ಸಂಬಂಧ ಪಟ್ಟ ಇಲಾಖೆಗಳ ಗಮನಕ್ಕೆ ತಂದಿದ್ದರಿಂದ ಬುಧವಾರ ಕೆ ಇ ಬಿ,ಅರಣ್ಯ,ಅಗ್ನಿ ಶಾಮಕ,ಪೊಲೀಸ್ ಇಲಾಖೆಯ ಸಹಕಾರದಲ್ಲಿ ಅಪಾಯಕಾರಿಯಾದ ಕೊಂಬೆ ಗಳನ್ನು ಕಟಾವು ಮಾಡಿದರು.