ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತೆಯ ವಿಷಯದಲ್ಲಿ ಕಠಿಣ ನಿಲುವು ತೆಗೆದುಕೊಂಡಿದ್ದು, ನಗರದಾದ್ಯಂತ ಮಿಂಚಿನ ತಪಾಸಣೆ ಶುರು ಮಾಡಿದೆ. ಇಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಿವಿಧ ಪ್ರದೇಶಗಳಲ್ಲಿ ಪಾಲಿಕೆಯ ಅಧಿಕಾರಿಗಳು ತಪಾಸಣೆ ನಡೆಸಿ ಟ್ರೇಡ್ ಲೈಸೆನ್ಸ್ ಅಪ್-ಟು-ಡೇಟ್ ಇಲ್ಲದಿದ್ದರೆ ಅಥವಾ ಯೂಸರ್ ಫೀಸ್ ಕಟ್ಟದೇ ಇರುವವರಿಗೆ ಮತ್ತು ಬೀದಿಬದಿಯಲ್ಲಿ ಕಸ ಎಸೆಯುವುದು ಅಥವಾ ನಿಷೇಧಿತ ಪ್ಲಾಸ್ಟಿಕ್ ಬಳಸಿ ನಿಯಮ ಉಲ್ಲಂಘಿಸಿದವರಿಗೆ ಸ್ಥಳದಲ್ಲೇ ಹುಧಾಮಪಾ ಅಧಿಕಾರಿಗಳು ತಕ್ಷಣ ದಂಡ ವಿಧಿಸಿದರು.