ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 52 ರ ಜಗದೀಶ ನಗರದಲ್ಲಿರುವ ಶ್ರೀ ಎಲ್ಲಮ್ಮ ದೇವಿ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಬಿಡುಗಡೆಗೊಳಿಸಿದ ಅನುದಾನದ ಚೆಕ್ ಅನ್ನು ಶಾಸಕರಾದ ಮಹೇಶ್ ಟೆಂಗಿನಕಾಯಿ ಅವರು ವಿತರಿಸಿದರು. ಈ ಸಂದರ್ಭದಲ್ಲಿ ಹುಬ್ಬಳ್ಳಿ ನಗರ ತಹಶೀಲ್ದಾರರಾದ ಮಹೇಶ ಗಸ್ತೆ, ದೇವಸ್ಥಾನದ ಟ್ರಸ್ಟ್ ಕಮೀಟಿಯ ಅಧ್ಯಕ್ಷರಾದ ಸಂಜೀವ ಜಂಗ್ಲಿ,ಪ್ರಮುಖರಾದ ಹರೀಶ ಜಂಗ್ಲಿ, ಕಿಶನ್ ಬಿಲಾನಾ,ಶ್ರೀಮತಿ ಗೀತಾ ಮುದ್ದಿ, ಮಂಜುನಾಥ ಬ್ಯಾಡಗಿ, ದುರ್ಗಪ್ಪ ಮುದ್ದಿ, ಫಕೀರಪ್ಪ ಶ್ರಾವಣ, ಅಶೋಕ ಕಟ್ಟಿಮನಿ, ಸಂತೋಷ ಕುಂದನಹಳ್ಳಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.