ಸಕ್ರಬೈಲಿನ ಆನೆಯಾದ ಬಾಲಣ್ಣನ ಚಿಕಿತ್ಸೆಗಾಗಿ ಬೆಂಗಳೂರಿನಿಂದ ಮೆಡಿಕಲ್ ತಂಡ ಶಿವಮೊಗ್ಗಕ್ಕೆ ಬಂದಿಳಿದಿದ್ದು ಬಾಲಣ್ಷನ ತಪಾಸಣೆ ನಡೆಸಿ ಶನಿವಾರ ಸಂಜೆ 4 ಗಂಟೆಗೆ ಚಿಕಿತ್ಸೆ ನೀಡಿದೆ. ಶಿವಮೊಗ್ಗದ ಸಕ್ರೆಬೈಲಿನಲ್ಲಿರುವ ಬಾಲಣ್ಣನಿಗೆ ಕಾಲು ನೋವಿಗಾಗಿ ನೀಡಲಾದ ಪೈಯ್ನ್ ಕಿಲ್ಲರ್ ಚುಚ್ಚುಮದ್ದು ನೀಡಿದ ಕಾರಣ ಕಿವಿಯಲ್ಲಿ ಪಸ್ ಆಗಿತ್ತು. ಪರಿಣಾಮ ಕೊಳೆತವೂ ಸಹ ಆರಂಭವಾಗಿತ್ತು. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಕ್ತ ಚಿಕಿತ್ಸೆ ನೀಡಿ ಅಗತ್ಯ ಕ್ರಮ ಜರುಗಿಸಲು ಆದೇಶಿಸಿದ್ದರು. ಸಚಿವರ ಆದೇಶದ ಮೇರೆಗೆ ಸಿಸಿಎಫ್ ಹನುಮಂತಪ್ಪನವರು ಬೆಂಗಳೂರಿನಿಂದ ತಜ್ಞರ ತಂಡವನ್ನೇ ಆಹ್ವಾನಿಸಿದ ಹಿನ್ನೆಲೆ ಇಂದು ಬೆಂಗಳೂರಿನ ತಂಡ ಚಿಕಿತ್ಸೆ ನೀಡಿದೆ.