ಸ್ವಚ್ಛ ಹುಬ್ಬಳ್ಳಿ ಧಾರವಾಡ ನಿರ್ಮಾಣದಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆ, ಜವಾಬ್ದಾರಿ ಹಾಗೂ ಪಾತ್ರದ ಕುರಿತು ಸ್ವಚ್ಚ ಭಾರತ ಮಿಷನ್ 2.0 ಅಡಿಯಲ್ಲಿ ನಡೆಯುತ್ತಿರುವ ಕಾರ್ಯಾಗಾರ ಹಾಗೂ ವಸ್ತುಪ್ರದರ್ಶನವನ್ನು ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಉದ್ಘಾಟಿಸಿದರು. ಈ ವೇಳೆಯಲ್ಲಿ ಉಪಮಹಾಪೌರರಾದ ಸಂತೋಷ.ಚವ್ಹಾಣ, ಪಾಲಿಕೆಯ ಸಭಾ ನಾಯಕರಾದ ಈರೇಶ.ಅಂಚಟಗೇರಿ, ವಿರೋಧ ಪಕ್ಷದ ನಾಯಕರಾದ ಇಮ್ರಾನ್ ಎಲಿಗಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.