ಹುಬ್ಬಳ್ಳಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಸಿ ವ್ಯಕ್ತಿವೋರ್ವನನ್ನು ಇಬ್ಬರು ಕಾರಿನಲ್ಲಿ ಅಪಹರಿಸಕೊಂಡು ಹೋಗಿ ಹಣ ನೀಡದಿದ್ದರೆ ಜೀವ ಸಹಿತ ಬಿಡಲ್ಲ ಎಂದು ಜೀವ ಬೆದರಿಕೆ ಹಾಕಿದ ಪ್ರಕರಣ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಖಾಜಾ ಮೊಯಿನುದ್ದೀನ್ ಸಗಟಿ ಎಂಬುವರು ಹಳೇ ಹುಬ್ಬಳ್ಳಿಯ ಹಜರತಲಿ ಬಾವಣ್ಣವರ, ಆರೀಫ್ ದಾಸ್ತಿಕೊಪ್ಪ ವಿರುದ್ಧ ದೂರು ನೀಡಿದ್ದಾರೆ. ಇವರಿಬ್ಬರು ಸೇರಿಕೊಂಡು ನನ್ನ ಸಹೋದರರನ್ನು ಖಾನಾಪೂರ ಬುರಣಕಿ ಗ್ರಾಮದ ಮನೆವೊಂದರಲ್ಲಿ ಕೂಡಿಹಾಕಿ ಹಣ ನೀಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ----