ಬೆಂಗಳೂರು ಉತ್ತರ: ಮಗುವಿನ ವಿಚಾರಕ್ಕೆ ಅಕ್ಕ ಪಕ್ಕ ಮನೆಯವರ ಫೈಟ್! ಬ್ಯಾಡರಹಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ!
ಆಗಸ್ಟ್ 14 ಮಧ್ಯಾಹ್ನ ಎರಡು ಗಂಟೆಗೆ ಬ್ಯಾಡರಹಳ್ಳಿಯಲ್ಲಿ ಮನೆಯಲ್ಲಿ ಆಟ ಆಡ್ತಾ ಇದ್ದ ಮಗುವಿನ ವಿಚಾರಕ್ಕೆ ಎದುರು ಬದುರು ಮನೆಯವರು ಗಲಾಟೆ ಮಾಡಿಕೊಂಡಿದ್ದಾರೆ. ಸೌಮ್ಯ ಮತ್ತು ಗಂಗಾಧರ್ ದಂಪತಿಯ ಆರು ವರ್ಷದ ಪುತ್ರ ನ ವಿಚಾರಕ್ಕೆ ರಾಜೇಶ್ವರಿ ಎಂಬುವವರ ಜೊತೆ ಫೈಟ್ ನಡೆದಿದೆ. ಬಕೆಟ್ ನೀರು ಚೆಲ್ಲಿದ ಅನ್ನೋ ಕಾರಣಕ್ಕೆ ವಾಕ್ಸಮರ ನಡೆದಿದೆ. ಇಷ್ಟಕ್ಕೆ ಟಾಕ್ ಫೈಟ್ ನಿಂತಿಲ್ಲ. ಅದೇ ದಿನ ರಾತ್ರಿ ರಾಜೇಶ್ವರಿ ಮಕ್ಕಳು ಬಂದು ಗಂಗಾಧರ್ ಸೌಮ್ಯ ಮನೆ ಬಳಿ ಬಂದು ಕಿರಿಕ್ ಮಾಡಿದ್ದಾರೆ. ಬಾಗಿಲು ಬಡಿದು ಮನೆ ಇಂದ ಹೊರ ಕರೆಸಿ ಕ್ರಿಕೆಟ್ ಬ್ಯಾಟ್ ಅಲ್ಲಿ ಹೊಡೆದು ಜೀವ ಬೆದರಿಕೆ ಹಾಕಿರುವ ಆರೋಪ ಇದೆ. ಘಟನೆ ಡೆಡ್ಲಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.