ಗುಳೇದಗುಡ್ಡ: ಕೋಟೆಕಲ್ ಗ್ರಾಮದಲ್ಲಿ ಮೊಹರಂ ಹಬ್ಬದ ನಿಮಿತ್ತ ಆಕರ್ಷಕ ಟಗರಿನ ಕಾಳಗ ಆಯೋಜನೆ, ಜಿಲ್ಲೆಯ ವಿವಿಧ ಭಾಗಗಳಿಂದ ಟಗರುಗಳು ಭಾಗಿ
ಗುಳೇದಗುಡ್ಡ ತಾಲೂಕಿನ ಕೋಟೆಕಲ್ ಗ್ರಾಮದಲ್ಲಿ ಟಗರಿನ ಕಾಳಗ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು, ಮೊಹರಂ ಹಬ್ಬದ ನಿಮಿತ್ತವಾಗಿ ಜೈ ಹನುಮಾನ್ ಗೆಳೆಯರ ಬಳಗ ಈ ಟಗರಿನ ಕಾಳಗ ಆಯೋಜಿಸಿದ್ದರು. ಭುಜಂಗರಾವ ದೇಸಾಯಿ, ಶಶಿ ದೇಸಾಯಿ, ರೆಹಮಾನ್ ಯೆಳಿಗುತ್ತಿ ಸೇರಿದಂತೆ ವಿವಿಧ ಗಣ್ಯರು ಈ ಆಕರ್ಷಕ ತಗರಿನ ಕಾಳಗ ಸ್ಪರ್ಧೆ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು.