ಯಲ್ಲಾಪುರ : ಸಂಖ್ಯೆ,ಸಂಘಟನೆ ಸಂಸ್ಕಾರ ಮೂರು ಸಕಾರಗಳು ಹವ್ಯಕರಲ್ಲಿ ಮೇಳೈಸಿವೆ ಅವುಗಳನ್ನು ಕ್ಷೀಣಿಸಲು ಬಿಡಬಾರದು.ಈ ಸಕಾರಗಳು ನಮ್ಮ ಹಿಂದೂ ಸಮುದಾಯವನ್ನು ಬಲಗೊಳಿಸುತ್ತವೆ ಎಂದು ಸ್ವರ್ಣವಲ್ಲೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಅವರು ಗುರುವಾರ ಕಾಳಮ್ಮನಗರದಲ್ಲಿ ತಾಲೂಕಾ ಹವ್ಯಕ ಸಂಘ ಮತ್ತು ಹವ್ಯಕ ಭವನ ಕಟ್ಟಡ ಸಮಿತಿಯ ಸುಮಾರು ೮ ಕೋಟಿ ರೂಗಳಿಗೂ ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟಡದ ಭೂಮಿಪೂಜೆ, ಅಡಿಗಲ್ಲು ಸಮಾರಂಭ ನೆರವೇರಿಸಿ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.