ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದಲ್ಲಿ ಸರ್ಕಾರದ ಬೆಂಬಲ ಯೋಜನೆಯಡಿ ಹೆಸರು ಹಾಗೂ ಇತರೆ ಬೆಳೆಗಳ ಖರೀದಿ ಕೇಂದ್ರವನ್ನು ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷರಾದ ಶ್ರೀ ಜಿ ಎಸ್ ಮಾದಾಪೂರ, ಪಿ.ಕೆ ಪಿ.ಎಸ್ ಅಧ್ಯಕ್ಷರಾದ ಪಾಂಡಪ್ಪ ಹೊಸಮನಿ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಪ್ರವೀಣ್ ಹಲಗತ್ತಿ, ವೆಂಕಣ್ಣ ಕೊಣ್ಣೂರ್, ಜಿ ಎಲ್ ಹೊಂಬಳ, ಶಿವಪ್ಪ ಹೂಗಾರ, ಅಶೋಕ್ ನೀರಲಗಿ, ಚಾಂದುಸಾಬ್ ನದಾಫ್, ಅರುಣಕುಮಾರ ಮಜ್ಜಗಿ, ಗಿರೀಶ್ ಹೊನ್ನಳ್ಳಿ, ರವಿ ಹಲಗತ್ತಿ, ಸೊಸೈಟಿಯ ಕಾರ್ಯದರ್ಶಿಯಾದ ವಿಜಯಾನಂದ ಹೊಂಬಳ, ಶಿವಪ್ಪ ಹೂಗಾರ ಚನ್ನಪ್ಪ ಮರಿಗೌಡರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.