ಧಾರವಾಡದ ಕೆಲಗೇರಿ ಕೆರೆಯ ಇನ್ಲೆಟ್ ಅಭಿವೃದ್ಧಿ ಕಾಮಗಾರಿಯನ್ನು (Inlet improvement work) ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (NGT) ಅಧ್ಯಕ್ಷರಾದ ಸುಭಾಷ ಹಡಿ ಅವರು ಇಂದು ವೀಕ್ಷಿಸಿದರು ಹಾಗೂ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಅಭಿವೃದ್ಧಿ) ವಿಜಯ್ ಕುಮಾರ್ ಆರ್ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಸಂತೋಷ ಕುಮಾರ್ ಯರಂಗಾಳಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ವಲಯ ಸಂಖ್ಯೆ 1 ರ ಸಹಾಯಕ ಆಯುಕ್ತರು ಹಾಗೂ ವಲಯ ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಕಾಮಗಾರಿಯ ವಿವರಗಳನ್ನು ನೀಡಿದರು.