ಅಂಬೇಡ್ಕರ್ ಫೋಟೋಗೆ ಗೆ ಅವಮಾನಿಸಿದ್ರಾ ವಕೀಲ ಅಂಜನ್ ? ಅಂಜನ್ ಕುಮಾರ್ ಗೌಡ ಮೇಲೆ ಅಂಬೇಡ್ಕರ್ ಫೋಟೋವನ್ನು ಕಿತ್ತೆಸೆದಿರುವ ಆರೋಪ ಕೇಳಿ ಬಂದಿದ್ದು, ಡಿ.6 ರಂದು ಕೆಲ ವಕೀಲರು ಸಿಟಿ ಸಿವಿಲ್ ಕೋರ್ಟ್ ವಕೀಲರ ಭವನದ ಮುಂದೆ ಡಾ.ಅಂಬೇಡ್ಕರ್ ರವರ ಪರಿನಿಬ್ಬಾಣ ಕಾರ್ಯ ಕ್ರಮ ಆಯೋಚಿಸಿದ್ದರು. ಶಾಂತಿಯುತವಾಗಿ ಅಂಬೇಡ್ಕರ್ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ವಕೀಲ ಅಂಜನ್ ಕುಮಾರ್ ಗೌಡ. "ನಿಮಗೆ ಯಾರು ಇಲ್ಲಿ ಅನುಮತಿ ಕೊಟ್ಟಿದ್ದು, ಇಲ್ಲಿ ಯಾಕೆ ಫೋಟೋ ಇಟ್ಟಿದ್ದೀರಾ" ಎಂದು ಫೋಟೋ ಬಿಸಾಕಲು ಯತ್ನಿಸಿದ್ದಾರೆ. ಮಾದಿಗ ವಕೀಲರಿಗೆ ಫೋಟೋ ಇಟ್ಟು ಪೊಜೆ ಮಾಡುವುದು ಬಿಟ್ಟು ಬೇರೆ ಏನು ಕೆಲಸ ಇಲ್ವಾ" ಎಂದು ಹಲ್ಲೆಗೆ ಯತ್ನಿಸಿದ್ದಾರೆ..