ಶಿರಸಿ ಉಪವಿಭಾಗದ ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ರೈತರ ಆತ್ಮಹತ್ಯೆ, ಆಕಸ್ಮಿಕ ಸಾವು ಹಾಗೂ ಬಣವೆ ನಷ್ಟ ಪ್ರಕರಣಗಳ ಬಗ್ಗೆ ಸಭೆಯನ್ನು ಈ ಕಾರ್ಯಾಲಯದಲ್ಲಿ ಕುಮಾರಿ ಕಾವ್ಯರಾಣಿ ಕೆ.ವಿ ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗಿಯ ದಂಡಾಧಿಕಾರಿಗಳು ಶಿರಸಿ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಸಭೆಯಲ್ಲಿ ಶ್ರೀ ಪಟ್ಟರಾಜ ಗೌಡ ತಹಶೀಲ್ದಾರ ಶಿರಸಿ, ಸಿ.ಜಿ ನಾಯ್ಕ ತಹಶೀಲ್ದಾರ ಗ್ರೇಡ್-2 ಯಲ್ಲಾಪುರ, ವೈದ್ಯಾಧಿಕಾರಿಗಳು ಶಿರಸಿ ಮತ್ತು ಯಲ್ಲಾಪುರ, ಕಾರ್ಯನಿರ್ವಹಣಾ ಅಧಿಕಾರಿಗಳು ತಾಲೂಕು ಪಂಚಾಯತ ಶಿರಸಿ, ಪೊಲೀಸ್ ಇಲಾಖೆ ಯಲ್ಲಾಪುರ, ಬನವಾಸಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇದ್ದರು.