ಯಲ್ಲಾಪುರ:ಪಟ್ಟಣದ ಹೆಬ್ಬಾರ ನಗರದಲ್ಲಿ ನಿರ್ಮಿಸಲಾಗಿರುವ ಜಿ +2 ವಸತಿಗೃಹಗಳನ್ನು ಕೂಡಲೇ ಫಲಾನುಭವಿಗಳಿಗೆ ಹಸ್ತಂತರಿಸುವಂತೆ ಆಗ್ರಹಿಸಿ ಬಿಜೆಪಿ ಮಂಡಲದ ನೇತೃತ್ವದಲ್ಲಿ ಮಂಗಳವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತ ಪಡಿಸಿ ಬಡ ಜನರಿಂದ ಹಣಪಡೆದು ಸರ್ಕಾರ ಮನೆ ಕೊಡದೆ ವಂಚಿಸುತ್ತಿದೆ.. ವಸತಿ ಗೃಹ ನಿರ್ಮಾಣ ಗೊಂಡು ನಾಲ್ಕು ವರ್ಷವಾದರೂ ಪಟ್ಟಣ ಪಂಚಾಯತ್ ಮತ್ತು ಶಾಸಕರ ಇಚ್ಚಾಶಕ್ತಿ ಯ ಕೊರತೆಯಿಂದ ಹಂಚಿಕೆಯಾಗಿಲ್ಲ ಎಂದರು.