ಹುಬ್ಬಳ್ಳಿ : ಸರಕಾರ ನಡೆಸುವವರಿಗೆ ಅಹಂಕಾರ ಒಳ್ಳೆಯದಲ್ಲ. ರಾಜ್ಯಕ್ಕೆ ಬರಬೇಕಿದ್ದ 'ಗೂಗಲ್' ಇನ್ವೆಸ್ಟ್ಮೆಂಟ್ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವರ ಅಹಂಕಾರದ ಮಾತುಗಳಿಂದ ಬೇರೆ ರಾಜ್ಯದ ಪಾಲಾಯಿತು ಎಂದು ಕೇಂದ್ರ ಸಚಿವ ಪ್ರಲಾದ ಜೋಶಿ ಬೇಸರ ವ್ಯಕ್ತಪಡಿಸಿದ್ದಾರೆ. ಅಹಂಕಾರದ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ನಡೆಸುವವರಿಗೆ ವಿನಮ್ರತೆ ಇರಬೇಕು. ಮಾತುಗಳನ್ನಾಡಿದ್ರೆ ರಾಜ್ಯ ಹಿಂದುಳಿಯುತ್ತದೆ. ಕೈಗಾರಿಕೋದ್ಯಮಿಗಳು ಮೊದಲಿನಿಂದಲೂ ಆತಂಕ ವ್ಯಕ್ತಪಡಿಸುತ್ತಿದ್ದರು. ಅವರ ಬಗ್ಗೆ ಸಹಾನುಭೂತಿಯಿಂದ ಮಾತನಾಡಬೇಕಿತ್ತು. ಆದ್ರೆ ಅವರಿಗೆ ಸಿಎಸ್ಆರ್ ಅನುದಾನ ಲೆಕ್ಕೆ ಸೇರಿದಂತೆ ಬೇರೆ ರೀತಿ ಮಾತನಾಡಿದರು. ರಾಜ್ಯ ಸರಕಾರದಲ್ಲಿರ