ಹುಬ್ಬಳ್ಳಿ: ಲೋಕೋಪಯೋಗಿ ಇಲಾಖೆಯ1 ಕೋಟಿ ರೂ. ಅನುದಾನದಲ್ಲಿ ಕಲ್ಮೇಶ್ವರ ನಗರ, ಟಿಪ್ಪು ನಗರ ಒಳ ರಸ್ತೆಗಳ ಕಾಂಕ್ರೀಟಿಕರಣ ಮಾಡುವ ಕಾಮಗಾರಿಗೆ ಶಾಸಕರಾದ ಪ್ರಸಾದ್ ಅಬ್ಬಯ್ಯ ಅವರು ಭೂಮಿಪೂಜೆ ನೆರವೇರಿಸಿದರು . ಡಿಸಿಸಿ ಅಧ್ಯಕ್ಷರಾದ ಅಲ್ತಾಫ್ ಹಳ್ಳೂರು, ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ಸವಣೂರು ಮುತವಲ್ಲಿ ಕಲೇಶ್ವರ ನಗರ, ಹಾವೇರಿ ಮುತವಲ್ಲಿ ಟಿಪ್ಪು ನಗರ, ಮುನ್ನಾ ಮಾರ್ಕರ್, ಮುಸ್ತಾಕ್ ಅತ್ತಾರ, ಮುನ್ನಾ ಕಿತ್ತೂರು, ಅನ್ವರ ಮಧೋಳ, ಮಜರಖಾನ್, ರಾಜಶೇಖರ ಮೆಣಸಿಕಾಯಿ ಇತರರಿದ್ದರು.